ಮೈಸೂರು ಆಕಾಶವಾಣಿ ನಿಲಯದಲ್ಲಿ ಮೈಸೂರು ಹಬ್ಬದಾಚರಣೆ !
ಇದೇ ಮೊದಲು ಸಾರ್ವಜನಿಕರನ್ನು ಆಕಾಶವಾಣಿ ನಿಲಯದ ಒಳಗೆ ಬಿಡುತ್ತಿರುವುದು ; ಮೈಸೂರು ನಾಗರೀಕರು ಅತ್ಯಂತ ಸಂಭ್ರಮದಿಂದ ತಮ್ಮ ಪ್ರೀತಿಯ ಮೈಸೂರು ಆಕಾಶವಾಣಿ ನಿಲಯದ ಒಳ ಭಾಗದ ಕಾರ್ಯ ಚಟುವಟಿಕೆಗಳನ್ನು ಹತ್ತಿರದಲ್ಲಿ ನೋಡಲು ಕಾತುರರಾಗಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮ ನಿರೂಪಕ, ಶ್ರೀ. ಪ್ರಭು ಸ್ವಾಮಿ ಮಳಿ ಮಟ್, ಜೊತೆಯಲ್ಲಿ ಶ್ರೀಮತಿ. ಸುಮಾ ವಿಜಯಶಂಕರ್ ಶ್ರೀಮತಿ ಸಾವಿತ್ರಿ ರಂಗನಾಥ್, ಶ್ರೀ. ಬೇದ್ರೆ ಮಂಜುನಾಥ್ ರವರ ಜೊತೆಯಲ್ಲಿ ಶಾಲಾ ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ಭಾರತದ ಪ್ರೀತಿಯ ಪ್ರಧಾನಿ, ಶ್ರೀ. ನರೇಂದ್ರ ಭಾಯಿ ಮೋದಿಯವರು "ಅಪ್ನೀ ಮನ್ಕಿ ಬಾತ್" ಕಾರ್ಯಕ್ರದಲ್ಲಿ ಆಕಾಶವಾಣಿ ಮೈಸೂರಿನ ಸಾಧನೆಗಳನ್ನು ಕುರಿತು ಗುಣಗಾನ ಮಾಡಿದರು. ಮೈಸೂರು ಆಕಾಶವಾಣಿ ನಿಲಯದ ಮೈಸೂರು ಹಬ್ಬವನ್ನು ವೀಕ್ಷಿಸಿದ ಮೈಸೂರಿನ ನಾಗರಿಕರ ಅನಿಸಿಕೆಗಳು : -ಸುಮಾ ವಿಜಯಶಂಕರ್, ಎಂ. ಎಸ್ಸಿ.; ಬಿ. ಎಡ್ ಉಪನ್ಯಾಸಕರು , ಮ್ಯಾಥೆಮ್ಯಾಟಿಕ್ಸ್ ದಿನಾಂಕ ೧೮, ನವೆಂಬರ್, ೨೦೨೨ ರಂದು ಆಕಾಶವಾಣಿ ಮೈಸೂರು ಕೇಂದ್ರವು ತನ್ನ ನುಡಿಸೇವೆಯಲ್ಲಿ ೮೭ ವರ್ಷಗಳನ್ನು ಪೂರೈಸಿ, ೮೮ ನೇ ವರ್ಷಕ್ಕೆ ಮುನ್ನಡೆತಿದ್ದು ' ಕನ್ನಡ ಹಬ್ಬ' ವನ್ನು ಆಯೋಜಿಸಿತ್ತು. ಅದಕ್ಕೆ ನಾನೂ ಸಹಿತ ಹೋಗಿದ್ದೆ, ಎಂಬುದು ಸಂತಸದ ವಿಷಯ. ಹೋ